ಭಟ್ಕಳ, ಡಿಸೆಂಬರ್ 21: ನಗರದ ರೈಲ್ವೇ ನಿಲ್ದಾಣದಲ್ಲಿ ಅಗತ್ಯವಿರುವ ಹಲವು ಸೇವೆಗಳನ್ನು ಉಲ್ಲೇಖಿಸಿ ನಗರದ ರೋಟರಿ ಕ್ಲಬ್ ಮನವಿಯೊಂದನ್ನು ಶಾಸಕ ಜೆ.ಡಿ.ನಾಯ್ಕರ ಮೂಲಕ ರೈಲ್ವೇ ಮಂತ್ರಿಗಳಿಗೆ ಸಲ್ಲಿಸಿತು.
ನಗರದ ರೈಲ್ವೇ ನಿಲ್ದಾಣದಲ್ಲಿ ನಿಲ್ದಾಣ ಮಾಸ್ಟರ್ ಸಮ್ಮುಖದಲ್ಲಿ ಮನವಿಯ ಪ್ರತಿಯನ್ನು ಹಸ್ತಾಂತರಿಸಲಾಯಿತು.

ಗರೀಬ್ ರಥ್ ರೈಲಿಗೆ ಭಟ್ಕಳದಲ್ಲಿ ನಿಲುಗಡೆ, ಮಂಗಳೂರಿಗೆ ಹಗಲು ರೈಲು, ಯಶವಂತಪುರ ಎಕ್ಸ್ ಪ್ರೆಸ್ ರೈಲು ಕಾರವಾರದವರೆಗೆ ವಿಸ್ತರಣೆ, ಜನ್ ಶತಾಬ್ದಿ ರೈಲಿಗೆ ಮರುಚಾಲನೆ, ಆನ್ಲೈನ್ ಟಿಕೆಟ್ ವ್ಯವಸ್ಥೆ ಸಹಿತ ಹಲವು ಬೇಡಿಕೆಗಳನ್ನು ಮನವಿ ಪತ್ರದಲ್ಲಿ ಸಲ್ಲಿಸಲಾಯಿತು.
ಸೌಜನ್ಯ: ಜ಼ೀಶಾನ್ ಅಹ್ಮದ್ ಖತೀಬ್
ಅಧ್ಯಕ್ಷರು, ರೋಟರಿ ಕ್ಲಬ್, ಭಟ್ಕಳ
ಇಶನ್ ಆಹ್ಮೆದ್ ಖ್ಹತೀಬ್